ನನ್ನ ದುನಿಯಾ ಆರಂಭ
Posted date: 26 Thu, May 2016 – 09:49:33 AM

ಶ್ರೀಪ್ರಸನ್ನ ಆಂಜನೇಯ ಸ್ವಾಮಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಧಮ್ಮ ಅವರು ನಿರ್ಮಿಸುತ್ತಿರುವ ‘ನನ್ನ ದುನಿಯಾ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ಮೋದಿ ಆಸ್ಪತ್ರೆ ಬಳಿಯ ವರಸಿದ್ದಿ ವಿನಾಯಕ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಾಗರಭಾವಿ ಬಿಬಿಎಂಪಿ ಸದಸ್ಯರಾದ ಮೋಹನ್ ಕುಮಾರ್ ಆರಂಭ ಪಲಕ ತೋರಿದರು. ಮಂಗಳಮುಖಿಯೊಬ್ಬರು ಕ್ಯಾಮೆರಾ ಚಾಲನೆ ಮಾಡಿದರು.
   ಕೆ.ಹೆಚ್.ಮೂರ್ತಿಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡುತ್ತಿದ್ದಾರೆ. ರಾಜ್‌ಪ್ರದೀಪ್ ಗಾಂಧಿ ಛಾಯಾಗ್ರಹಣ ಹಾಗೂ ಹ್ಯಾರಿಸ್ ಜಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
   ಹಿಂದೆ ಕೊಳ್ಳೆಗಾಲ ಚಿತ್ರದಲ್ಲಿ ಅಭಿನಯಿಸಿದ್ದ ಕಿರಣ್ ಗೌಡ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ರಚನಾ ದಸರಥ್. ರಮೇಶ್‌ಭಟ್, ಗೋಪಾಲಕೃಷ್ಣ ಗಡೇನಹಳ್ಳಿ, ಲಕ್ಷ್ಮಣ್, ಮೈಸೂರು ರಮಾನಂದ್, ಕಿಲ್ಲರ್ ವೆಂಕಟೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬೆಂಗಳೂರು, ಮಾಗಡಿ ತಾಲ್ಲ್ಲೂಕಿನ ಹೊಸೂರು, ಕಾವಲಪಾಳ್ಯ ಗ್ರಾಮ, ಮೈಸೂರು, ಮಡಿಕೇರಿ, ಸುಳ್ಯ, ಶಿರಸಿ, ಪುತ್ತೂರು ಮುಂತಾದ ಕಡೆ ಚಿತ್ರಕ್ಕೆ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed